*ನವೆಂಬರ್ 8,9 ಮತ್ತು 10ರಂದು ಮೂರು ದಿನಗಳ ಶ್ರೀ ಕಾಡು ಮಲ್ಲಿಕಾರ್ಜುನ ಸ್ವಾಮಿ ಸನ್ನಿಧಾನದಲ್ಲಿ 9ನೇ ವರ್ಷದ ರೈತ ಸ್ನೇಹಿ ಮಲ್ಲೇಶ್ವರ ಕಡಲೆಕಾಯಿ ಪರಿಷೆ*
ಬೆಂಗಳೂರು :ಕಾಡುಮಲ್ಲೇಶ್ವರ ಗೆಳಯರ ಬಳಗದ ಶ್ರೀ ಭ್ರಮರಂಭ ಸಮೇತ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ನವೆಂಬರ್ 8ರಿಂದ 9,10ರಂದು ಮೂರು ದಿನಗಳ 9ನೇ ವರ್ಷದ ರೈತ ಸ್ನೇಹಿ ಮಲ್ಲೇಶ್ವರ ಕಡಲೆಕಾಯಿ ಪರಿಷೆ ಇದರ ಕುರಿತು ಮಾಧ್ಯಮಗೋಷ್ಟಿ.
ಕಾಡುಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷರಾದ ಬಿ.ಕೆ.ಶಿವರಾಂರವರು, ಉಪಾಧ್ಯಕ್ಷೆ ಲೀಲಾ ಸಂಪಿಗೆರವರು, ಸಂಘದ ಅನೂಪ್ ಅಯ್ಯಂಗಾರ್, ಶ್ರೀವಲ್ಲಭ, ಚಂದ್ರಶೇಖರ್ ನಾಯ್ಡು, ಸೋಮಶೇಖರ್, ನರಸಿಂಹಪ್ರಭು, ಸುಧಾಕರ್, ರಾಜಶಶಿಧರ್, ಸಾಮಾಜಿಕ ಸೇವಾ ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು ಮಾಧ್ಯಮಗೋಷ್ಟಿಯಲ್ಲಿ ಭಾಗವಹಿಸಿದ್ದರು.
*ಅಧ್ಯಕ್ಷರಾದ ಬಿ.ಕೆ.ಶಿವರಾಂರವರು* ಮಾತನಾಡಿ ಶ್ರೀ ಕಾಡು ಮಲ್ಲೇಶ್ವರ ಗೆಳಯರ ಬಳಗ ಕಲೆ, ಸಾಹಿತ್ಯ, ಸಾಂಸ್ಕೃತಿಕ, ಸಂಸ್ಕೃತಿ ಉಳಿಸಿ, ಬೆಳಸಲು ಶ್ರಮಿಸುತ್ತಿದೆ. ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಪರಿಸರ ಸ್ನೇಹಿ ವಾತವರಣವಾಗಿ ನಿರ್ಮಿಸಲು ಕಾಡು ಮಲ್ಲೇಶ್ವರ ಗೆಳಯರ ಬಳಗಕ್ಕೆ ಸಲ್ಲುತ್ತದೆ.
ನವೆಂಬರ್ 8ರಂದು ಸಂಜೆ ಮಲ್ಲಿಕಾರ್ಜುನ ಸ್ವಾಮಿ, ನಂದಿಯ ಮೂರ್ತಿಗೆ ಕಡಲೆಕಾಯಿ ಅಭಿಷೇಕ ಮಾಡುವ ಮೂಲಕ ಉದ್ಘಾಟನೆ ನೇರವೆರಲಿದೆ.
ನವೆಂವರ್ 9ರಂದು ಹುಣ್ಣಿಮೆ ಹಾಡು ವಾರ್ಷಿಕ ಪ್ರಶಸ್ತಿಯನ್ನು ಗರ್ತಿಕೆರೆ ರಾಘಣ್ಣರವರಿಗೆ ಪ್ರಶಸ್ತಿ 10ಸಾವಿರ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಗುತ್ತಿದೆ.
ದೈವದ ಮೇಲೆ ನಂಬಿಕೆ ಇರಲಿ,ಮೂಢನಂಬಿಕೆ ಮೇಲ್ಲಲ. ರೈತ ಸ್ನೇಹಿ ಕಡಲೆಕಾಯಿ ಪರಿಷೆಯಲ್ಲಿ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರ ಮೂಲಕ ರೈತರಿಗೆ ಬೀದಿ ಬದಿಯ ವ್ಯಾಪಾರಿಗಳಿಗೆ ಮಾರಾಟ ಮಾಡಲು ಅವಕಾಶ ನೀಡಲಾಗಿದೆ , ಮಾರಾಟಗಾರರಿಂದ ಯಾವುದೇ ಶುಲ್ಕ ವಿಧಿಸಲ್ಲ, ಹಳ್ಳಿಗಳಲ್ಲಿ ಸಂತೆ ಮಾದರಿಯಲ್ಲಿ ಹಾಗೂ ಮಧ್ಯವರ್ತಿಗಳು ಇಲ್ಲದೇ ರೈತರಿಂದ ನೇರವಾಗಿ ಗ್ರಾಹಕನಿಗೆ ಮಾರಾಟ ಮಾಡುವ ಗ್ರಾಮೀಣ ಸಂತೆ ಏರ್ಪಡಿಸಲಾಗಿದೆ.
ಪ್ಲಾಸ್ಟೀಕ್ ಮುಕ್ತ ಕಡಲೆಕಾಯಿ ಪರಿಷೆ 1ಲಕ್ಷಕ್ಕೂ ಹೆಚ್ಚು ಬಟ್ಚೆ ಮತ್ತು ಪೇಪರ್ ಬ್ಯಾಗ್ ಗಳನ್ನು ವಿತರಿಸಲಾಗುತ್ತಿದೆ. ವೆಂಡಿಂಗ್ ಮೀಷಿನ್ ಸಹ ಇಡಲಾಗುತ್ತದೆ ಇದರಲ್ಲಿ ವೆಸ್ಟ್ ಪ್ಲಾಸ್ಟೀಕ್ ಬಾಟಲ್ ಹಾಕಿದಾಗ ಒಂದು ರೂಪಾಯಿ ನೀಡಲಾಗುತ್ತದೆ.ಸ್ವಚ್ಚತಾ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಲಾಗಿದೆ ಎಂದು ಹೇಳಿದರು.
ನವೆಂಬರ್ 8ರಂದು ಸಂಜೆ 5ಗಂಟೆಗೆ ಮುಜರಾಯಿ ಮತ್ತು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿರವರು, ವಿಧಾನಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ , ಶ್ರೀಮತಿ ವೆಂಕಟಮ್ಮ ಮಟ್ಟ ಬಾರ್ಲು, ಶ್ರೀಮತಿ ಸರೋಜಮ್ಮ ಬನ್ನಪ್ಪರವರಿಂದ ಉದ್ಘಾಟನೆ. ಸಂಜೆ: 6-30ಕ್ಕೆ ಹುಣ್ಣಿಮೆ ಹಾಡು-222ರ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರವರ ಸ್ಮರಣೆಯಲ್ಲಿ ನೆನಪುಗಳ ಕಡಲಲ್ಲಿ ಶ್ರೀಮತಿ ಸವಿತಾ ಗಣೇಶ್ ಪ್ರಸಾದ್ ರವರ ನೇತೃತ್ವದಲ್ಲಿ ಗೀತೆಗಾಯನ ಮುಖ್ಯ ಅತಿಥಿಗಳು ಶಾಸಕರಾದ ವಿಜಯಾನಂದ ಎಸ್.ಕಾಶಪ್ಪನವರ್ , ವೀರಲೋಕ ಬುಕ್ಸ್ ಸಂಸ್ಥಾಪಕರಾದ ವೀರಕಪುತ್ರ ಎಂ.ಶ್ರೀನಿವಾಸ್ ರವರು.
ನವೆಂಬರ್ 9ರಂದು ಹುಣ್ಣಿಮೆ ಹಾಡು-223 ಬೆಳಗ್ಗೆ 11ಗಂಟೆಗೆ ಶ್ರೀಮತಿ ಮಧುಮನೋಹರನ್ ಮತ್ತು ಕಾರ್ತಿಕ್ ಪಾಂಡವಪುರ ತಂಡದವರಿಂದ ಭಾವ ಸಂಗೀತ ಸಂಗಮ ಕಾರ್ಯಕ್ರಮ.
ಸಂಜೆ 5 ಗಂಟೆಗೆ ಹುಣ್ಣಿಮೆ ಹಾಡು ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ. ನಾಡಿನ ಖ್ಯಾತ ಸುಗಮ ಸಂಗೀತಗಾರರಾದ ಗರ್ತಿಕೆರೆ ರಾಘಣ್ಣ ರವರಿಗೆ ಪ್ರಧಾನ.
ಖ್ಯಾತ ನಟಿ ಸುಧಾರಾಣಿ, ನಟ ವಿಜಯರಾಘವೇಂದ್ರರವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ನವೆಂಬರ್ 10ರಂದು ಸಂಜೆ 5ಗಂಟೆಗೆ ಶ್ರೀ ಭ್ರಮರಾಂಭ ಸಮೇತ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ 9ನೇ ಮಲ್ಲೇಶ್ವರ ಕಡಲೆಕಾಯಿ ಪರಿಷೆ ಸಂಪನ್ನ ಕಾರ್ಯಕ್ರಮ.
ಸಂಜೆ 6-30ಕ್ಕೆ ಹುಣ್ಣಮೆ ಹಾಡು-225ರ ಕಾರ್ಯಕ್ರಮ.ಕಾರ್ತಿಕ್ ಮಣಿ ಮತ್ತು ಜರ್ಮನಿ ದೇಶದ ಮ್ಯಾಗ್ನಸ್ ಡವ್ ನರ್ ತಂಡದವರಿಂದ ಕರ್ನಾಟಕ-ಜರ್ಮನಿ ಸಂಗೀತ ತಾಳವಾದ್ಯ ಸಂಗೀತ ಕಾರ್ಯಕ್ರಮ.
ವರದಿ 👉 ಸುಂದರ್, ಬೆಂಗಳೂರು

More Stories
ಅತ್ನೂರು ಗ್ರಾಮಗ್ರಾಮದಲ್ಲಿಬೇಡರ ಕಣ್ಣಪ್ಪ ಕಾಲೋನಿ ಹಾಗೂ ನಾಮಪಲಕ ಅನಾವರಣ
ಪರಿಸರ ಸಂರಕ್ಷಣೆ ಮತ್ತು ಸ್ವಚ್ಛ, ಹಸಿರು ಕರ್ನಾಟಕ ನಿರ್ಮಾಣದ 50 ವರ್ಷಗಳ ಸೇವೆ ಯಶಸ್ವಿ….
50 ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆಯ ಶಂಕುಸ್ಥಾಪನೆಯ ಭೂಮಿ ಪೂಜೆಯನ್ನು ಮಾಡಿದ ಶ್ರೀ ಲಕ್ಷ್ಮಣ ಸವದಿಯವರು*